ಸಾರಾ ಜೋಸೆಫ್ ಅವರು ಮಲೆಯಾಳಂ ಕಾದಂಬರಿ ಹಾಗೂ ಸಣ್ಣಕಥೆ ಬರಹಗಾರ್ತಿ. ಇವರು ೧೯೪೬ರಲ್ಲಿ ಕೇರಳದಲ್ಲಿ ಜನಿಸಿದರು. ಅವರ ವಆಲಹಾಯುಡ್ ಪೆನ್ಮಾಕಲ್ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೧೪ರ ಸಂಸತ್ ಚುನಾವಣೆಯನ್ನು ತ್ರಿಶೂರ್ನಿಂದ ಸ್ಪರ್ಧಿಸಿದರು. == ಆರಂಭಿಕ ಜೀವನ == ಸಾರಾ ಜೋಸೆಫ್ ೧೯೪೬ರಲ್ಲಿ ಕೇರಳದ ತ್ರಿಶೂರ್ ನಗರದ ಕುರಿಯಾಚೀರಾದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಲೂಯಿಸ್ ಮತ್ತು ತಾಯಿ ಕೊಚ್ಮರಿಯಮ್. ಅವರು ೧೫ನೇ ವಯಸ್ಸಿನಲ್ಲಿ ಮದುವೆಯಾದರು. ಅವರು ಶಿಕ್ಷಕರ ತರಬೇತಿ ಪಡೆದು ಶಾಲೆಯ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಬಿ.ಎ. ಮತ್ತು ಎಂ.ಎ ಪದವಿಯನ್ನು ಖಾಸಗಿಯಾಗಿ ಪಡೆದು ಕೇರಳದಲ್ಲಿ ಕಾಲೇಜು ಸೇವೆಗೆ ಸೇರಿದರು. ಅವರು ಪಾಂಟಂಬಿ ಸಂಸ್ಕೃತ ಕಾಲೇಜಿನಲ್ಲಿ ಮಲಯಾಳಂನ ಪ್ರಾಧ್ಯಾಪಕರಾಗಿದ್ದರು. ಅವರ ಮಗಳ ಹೆಸರು ಸಂಗೀತ ಶ್ರೀನಿವಾಸನ್. == ವೃತ್ತಿಜೀವನ == ಸಾರಾ ಜೋಸೆಫ್ರವರು ಪ್ರೌಢಶಾಲೆಯಲ್ಲಿದ್ದಾಗ ಮಲಯಾಳಂ ವಾರಪತ್ರಿಕೆಗಳಲ್ಲಿ ಅವರ ಅನೇಕ ಕವಿತೆಗಳು ಪ್ರಕಟಗೊಂಡವು.ಸಾರಾ ಅವರ ಕವಿತೆಗಳು ವಿಲೋಪ್ಪಿಲ್ಲಿ ಶ್ರೀದೇರಾ ಮೆನನ್ ಮತ್ತು ಎಡಸ್ಸೇರಿ ಗೋವಿಂದನ್ ನಾಯರ್ ಅವರಂತಹ ಕವಿಗಳಿಂದ ಮೆಚ್ಚುಗೆ ಪಡೆದಿದೆ. ಅಲ್ಪಕಾಲದ ಅನಿಶ್ಚಿತತೆಯ ನಂತರ ಅವಳು ವಿಜ್ಞಾನಕ್ಕೆ ತೆಗೆದುಕೊಂಡು ಸಣ್ಣ ಕಥೆಗಳನ್ನು ಬರೆಯಲಾರಂಭಿಸಿದಳು. ಪಪಥಾರಾ ಅವರ ಸಣ್ಣ ಕಥೆಗಳ ಸಂಗ್ರಹವಾಗಿದೆ ಮತ್ತು ಮಲಯಾಳಂನ ಸ್ತ್ರೀವಾದಿ ಬರಹವಾಗಿದೆ. ಆಳಹಾಯುಡ್ ಪೆನ್ಮಾಕ್ಕಲ್, ಮ್ಯಾಥತಿ ಮತ್ತು ಒಥಪ್ಪು ಎಂಬ ಮೂರು ಕಾದಂಬರಿಗಳನ್ನು ಅವರು ಪ್ರಕಟಿಸಿದ್ದಾರೆ. ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಇವರ ರಾಮಾಯಣದ ವಿಮರ್ಶಾತ್ಮಕ ಬರಹದ ಇಂಗ್ಲೀಷ್ ಭಾಷಾಂತರವನ್ನು ಪ್ರಕಟಿಸಿದೆ. == ಅಮ್ನೆಸ್ಟಿ ಇಂಟರ್ನ್ಯಾಷನಲ್ == ೨೦೧೬ ರಲ್ಲಿ, ಎಬಿವಿಪಿ ವಿರುದ್ಧದ ವಿವಾದದಲ್ಲಿ ಅವರು ಅಮ್ನೆಸ್ಟಿ ಇಂಟರ್ನ್ಯಾಷನಲ್ ಅನ್ನು ಬೆಂಬಲಿಸಿದರು. == ಸಣ್ಣಕಥೆಗಳು == ಮನಸ್ಸೈಲ್ ಥೆ ಮಾಟ್ರಾಮ್ (೧೯೭೩) ಕದಿಂಟೆ ಸಂಗೀತಂ (೧೯೭೫) ಪಪಥಾರಾ ಒದುವಿಳತೇ ಸೂರ್ಯಕಾಂತಿ ನಿಲುವು ನಿರುವಾಗು ಪುದುರಾಮಯ್ಯಂ ಕಾದಿತು ಕಂಡಾಯೊ ಕಾಂತಾ ನಾನ್ಮತಿನ್ಮಾಕಲು ವೃಕ್ಷಂ (ಸಣ್ಣ ಕಥೆಗಳ ಸಂಕಲನ) == ಕಾದಂಬರಿಗಳು == ಥೈಕುಲಂ ಆಳಹಾಯುಡ್ ಪೆನ್ಮಾಕಲ್ ಮಾಟ್ಟಾತಿ ಒಥಪ್ಪು ಆಥಿ ಒರು ಕವಾಲ್ ಆಲೋಹರಿ ಆನಂದಂ == ಪ್ರಶಸ್ತಿ ಪುರಸ್ಕಾರಗಳು == ೨೦೧೨ರಲ್ಲಿ ಪದ್ಮಪ್ರಭಾ ಸಾಹಿತ್ಯ ಪ್ರಶಸ್ತಿ ೨೦೧೫ರಲ್ಲಿ ರಾಜಕೀಯ ಬರಹಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಆಳಹಾಯುಡ್ ಪೆನ್ಮಾಕಲ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಆಳಹಾಯುಡ್ ಪೆನ್ಮಾಕಲ್ ಕಾದಂಬರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಆಳಹಾಯುಡ್ ಪೆನ್ಮಾಕಲ್ ಕಾದಂಬರಿಗೆ ವಯಲಾರ್ ಪ್ರಶಸ್ತಿ ೨೦೧೧ರಲ್ಲಿ ಪಪರಥಾ ಕಥೆಗೆ ಮುಟ್ಟತು ವರ್ಕೈ ಪ್ರಶಸ್ತಿ == ಉಲ್ಲೇಖಗಳು ==